ಮಂಗಳೂರು/ಮೈಸೂರು: ಹಲವು ವರ್ಷಗಳ ಬೇಡಿಕೆಯಾಗಿದ್ದ ಮಂಗಳೂರು-ಮೈಸೂರು ವಿಮಾನಕ್ಕೆ ಇಂದು ಚಾಲನೆ ದೊರಕಿತು.
ಮೈಸೂರಿನಿಂದ ಬೆಳಗ್ಗೆ 10 :45 ಕ್ಕೆ ಹೊರಟ ವಿಮಾನ ಮಂಗಳೂರಿಗೆ 11.20 ಕ್ಕೆ ತಲುಪಿತು, ಇದರಲ್ಲಿ 25 ಪ್ರಯಾಣಿಕರು ಆಗಮಿಸಿದರು.ಮಂಗಳೂರಿನಿಂದ ಬೆಳಗ್ಗೆ 12.50 ಕ್ಕೆ ಹೊರಟ ವಿಮಾನ ಮೈಸೂರಿಗೆ 1.30 ಕ್ಕೆ ತಲುಪಿತು.
ಈ ವಿಮಾನದಲ್ಲಿ ಮೈಸೂರಿನಿಂದ ಮಂಗಳೂರಿಗೆ ಅಂಚೆ ಇಲಾಖೆ ವಿಶೇಷ ಅಂಚೆ ಲಕೋಟೆ ರವಾನಿಸಿದೆ. ವಿಶೇಷ ಅಂಚೆ ಲಕೋಟೆಯನ್ನು ಫಿಲಾಟಲಿ ಚಟುವಟಿಕೆಯ ಉತ್ತೇಜನಕ್ಕೆ ಆರಂಭಿಸಲಾಗಿದೆ.
ಮೈಸೂರಿನಲ್ಲಿ ಮಂಗಳೂರು ವಿಮಾನಕ್ಕೆ ಮೈಸೂರು ಸಂಸದ ಶ್ರೀ ಪ್ರತಾಪ್ ಸಿಂಹ, ಅಲಯನ್ಸ್ ಏರ್ ಸಿಇಓ ಹರ್ಪ್ರೀತ್ ಸಿಂಗ್ ಚಾಲನೆ ನೀಡಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಇಂದು ಮೈಸೂರು- ಮಂಗಳೂರು ನಡುವಿನ ವಿಮಾನಯಾನ ಸೇವೆಗೆ ಚಾಲನೆ ನೀಡಲಾಯಿತು . pic.twitter.com/X4OG7kSajb
— Pratap Simha (@mepratap) December 11, 2020
ಮಂಗಳೂರಿಗೆ ಬಂದ ವಿಮಾನವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಜಲ ಫಿರಂಗಿಗಳ ಮೂಲಕ ವಾಟರ್ ಸಲ್ಯೂಟ್ ನೀಡಿ ಸ್ವಾಗತಿಸಲಾಯಿತು.
With a zestful water cannon salute, we welcomed the inaugural @allianceair flight from #Mysuru to #Mangaluru. Aboard this first flight was the commemorative stamp released by @IndiaPostOffice marking this historic moment. Here's to the promising beginnings. #GatewayToGoodness pic.twitter.com/8n3IL2HBAV
— Mangaluru Airport (@mlrairport) December 11, 2020
ಪ್ರತಿ ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಮಾನ ಸೇವೆ ಲಭ್ಯವಿದ್ದು, ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ಅಂಗ ಸಂಸ್ಥೆಯಾದ ಅಲಯನ್ಸ್ ಏರ್ ವಿಮಾನ ವಾರದಲ್ಲಿ 4 ದಿನ ಸಂಚರಿಸಲಿದೆ.